ಗರುಡ ಗಮನ ವೃಷಭ ವಾಹನ -ಇದು ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಬರೆದು ನಿರ್ದೇಶಿಸಿದ ಭಾರತೀಯ ಕನ್ನಡ ಭಾಷೆಯ ಥ್ರಿಲ್ಲರ್ ಚಲನಚಿತ್ರವಾಗಿದೆ . ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ರವಿ ರೈ ಕಳಸ ಮತ್ತು ವಚನ ಶೆಟ್ಟಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಜೊತೆಗೆ ರಿಷಬ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಸಂಕಲನ ಮತ್ತು ಛಾಯಾಗ್ರಹಣ ಪ್ರವೀಣ್ ಶ್ರೀಯಾನ್ ಅವರದ್ದು. ಚಲನಚಿತ್ರವನ್ನು ರಕ್ಷಿತ್ ಶೆಟ್ಟಿಯವರ ಪರಮವಾ ಪಿಕ್ಚರ್ಸ್ ಪ್ರಸ್ತುತಪಡಿಸಿದೆ. == ಪಾತ್ರವರ್ಗ == ಶಿವನಾಗಿ ರಾಜ್ ಬಿ. ಶೆಟ್ಟಿ ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಗೋಪಾಲ ಕೃಷ್ಣ ದೇಶಪಾಂಡೆ ಬ್ರಮ್ಮಯ್ಯ ಪಾತ್ರದಲ್ಲಿ ಯುವ ಶಿವನಾಗಿ ಹರ್ಷದೀಪ್ ಚಿಕ್ಕ ಹರಿಯಾಗಿ ಚಿಂತನ್ ಜ್ಯೋತಿಶ್ ಶೆಟ್ಟಿ ಶೇಖರ್ ಪಾತ್ರದಲ್ಲಿ ದೀಪಕ್ ರೈ ಪಾಣಾಜೆ ಕರುಣಾಕರ್ ಪಾತ್ರದಲ್ಲಿ ಗುರು ಸನಿಲ್ ರಾಮನಾಥ್ ಪಾತ್ರದಲ್ಲಿ ಪಕಾಶ್ ತೂಮಿನಾಡ್ ಅವಿನಾಶ್ ಪಾತ್ರದಲ್ಲಿ ಜೆಪಿ ತೂಮಿನಾಡ್ ಪಿಲಿ ಪ್ರಕಾಶ್ ಪಾತ್ರದಲ್ಲಿ ಅನಿಲ್ ಉಪ್ಪಳ ಅವಿನಾಶ್ ಸ್ನೇಹಿತನಾಗಿ ಅರ್ಪಿತ್ ಅಡ್ಯಾರ್ ಸಚಿನ್ ಅಂಚನ್ ಸೌಮೇಶ್ == ಕಥಾವಸ್ತು == ಆಧುನಿಕ ಮಂಗಳೂರಿನ ಕರಾವಳಿ ಮತ್ತು ಸಾಂಸ್ಕೃತಿಕ ನಗರಿ ಮಂಗಳಾದೇವಿಯ ಹಿನ್ನೆಲೆಯಲ್ಲಿ ಹೊಂದಿಸಲಾದ ಗರುಡ ಗಮನ ವೃಷಬ ವಾಹನವು ಇಬ್ಬರು ಪುರುಷರ ಕಥೆಯಾಗಿದೆ: "ಹರಿ" ಮತ್ತು ಅವನ ಆತ್ಮ ಸಂಗಾತಿಯಾದ "ಶಿವ" ಅವರು ಮಂಗಳೂರಿನ ಕುಖ್ಯಾತ ದರೋಡೆಕೋರರಾಗುತ್ತಾರೆ. ದುರಾಶೆ, ರಾಜಕೀಯ ಮತ್ತು ಅವರ ಸ್ವಂತ ಅಹಂಕಾರಗಳು ಅವರ ವರ್ಷಗಳ ಸ್ನೇಹವನ್ನು ಪರೀಕ್ಷಿಸುತ್ತವೆ. == ಉಲ್ಲೇಖಗಳು ==